ಗೆಳತಿ…………….

June 28, 2007 at 8:13 am (ಕವನಗಳು)

null

ಅಂದು ನೀ ಕೊಟ್ಟ ಭರವಸೆಗಳೇನದವು ಗೆಳತಿ
ಮರೆತೆಯಾ ನೀ ಎಲ್ಲವನ್ನು
ನಮ್ಮ ಸ್ನೇಹದಲ್ಲಿ ಮಾತ್ಸರ್ಯವಿಲ್ಲೆಯೆಂದಿದ್ದೆ
ಇಂದೇನಾಗಿಹೋಯಿತು ಗೆಳತಿ..

ನಿನಗೆ ನಾ ಮಗುವು ನನಗೆ ನೀ ಮಗುವು
ಇದು ನಿನಗೆ ತಿಳಿದಿಲ್ಲವೇ..
ಮಗುವಿನಾ ಮುನಿಸಿದು ಎಂದು ನಾ ತಿಳಿದಿದ್ದೆ
ಆದರೇ ತಾಯಿಯೆ ಇಲ್ಲವೆನಗೆ ಎನ್ನುವುದು ನಿನಗೆ ತರವೇ?

ನಮ್ಮದು ತಿಳಿಹಾಲಿನದ್ದು ಬಂಧನವೆಂದ
ನಿನ್ನ ಅಷ್ಟೂ ಮಾತುಗಳು ಇಂದೇನಾದವು?
ಹಾಲಿನಂತ ಈ ಸ್ನೇಹ ಒಡೆದಿದ್ದಾದರು ಎಲ್ಲಿ ನೆನಪು ಮಾಡು….

ನನ್ನ ಸ್ನೇಹವಿದು ನಿನಗೆ ಪಂಜರದ ಹಕ್ಕಿಯೆನಿಸಿದರೆ
ಹಾರಿ ಬಿಡಲು ಆ ಹಕ್ಕಿಯನ್ನು ನಾನು ಸಿದ್ದ..
ಆದರೇ ಒಂದು ಮಾತು ಹಾರುವ ಮುನ್ನ
ನೀ ತಿಳಿಸದೇ ಹೋಗದಿರು
ನನ್ನ ಸ್ನೇಹ ನಿನಗೆ ಪಂಜರವಾದ ಕಾರಣವನ್ನ…….

7 Comments

  1. Prathiba said,

    The last stanza is really nice shilpa…if everyone understood frndshp like this, there wud be no problems between frnds!!

  2. suresh said,

    really sharp poem actually. I think I am starting to wish I had a real friend of a girl. I am of course, more interested in the panjarada hakki sort of a friendship :) and I think I am going to change once I read you poem. ;)

    ——————————————————–
    If you think you need to type in Kannada, please use quillpad.in/kannada/ It’s going to
    make your life so easy, you’ll think computers were made for Kannada. Try Quillpad. Put up lot
    of blog articles and anything else you may want to do…

  3. nagenagaaridotcom said,

    ನಗುವು ಸಹಜದ ಧರ್ಮ
    ನಗಿಸುವುದು ಪರ ಧರ್ಮ
    ನಗುವ ನಗಿಸುತ ನಗಿಸಿ
    ನಗುತ ಬಾಳುವ ವರವ
    ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
    ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.
    ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
    ವಿಳಾಸ: http://nagenagaaridotcom.wordpress.com/

    ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.

  4. gubbacchi said,

    ಪ್ರಿಯ ಶಿಲ್ಪ ಅವರೇ,

    ನಮಸ್ಕಾರ. ಹೇಗಿದ್ದೀರಿ?

    ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

    ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

    ಡೇಟು: ೧೬ ಮಾರ್ಚ್ ೨೦೦೮
    ಟೈಮು: ಇಳಿಸಂಜೆ ನಾಲ್ಕು
    ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

    ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

    ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

    ಅಲ್ಲಿ ಸಿಗೋಣ,
    ಇಂತಿ,

    -ಅಮರ

  5. neelihoovu said,

    ತುಂಬಾನೇ ಚೆನ್ನಾಗಿದೆ.
    ಕನ್ನಡಪ್ರಭದಲ್ಲಿ ಓದಿದ ಮೇಲೆ ನಿಮ್ಮ ಬ್ಲಾಗ್ ನ ಬಗ್ಗೆ ತಿಳೀತು.

    ಮಿಸ್ ಮಾಡ್ಕೊಂಡಿದ್ದೆ ಅನ್ನಿಸ್ತು ಇಷ್ಟ್ ದಿನ..:)

  6. saidecorsmanju said,

    a funtastic poem by you very nice . manjunath

  7. minchulli said,

    ನಮಸ್ತೆ.. ನಾಡಿದ್ದು 8-03-2009 ರಂದು ನಡೆಯುವ ಅಮ್ಮನ ಹಬ್ಬಕ್ಕೆ ನಿಮ್ಮನ್ನು ಆಮಂತ್ರಿಸಲು ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ. ನೀವು ಬಂದರೆ ತುಂಬಾ ಸಂತೋಷ ಆಗುತ್ತೆ.

    ಶುಭವಾಗಲಿ,
    - ಶಮ, ನಂದಿಬೆಟ್ಟ

Post a Comment

You must be logged in to post a comment.